Saturday, 30 August 2014

ಮಂಡ್ಯ

ಮಂಡ್ಯ


ಮಂಡ್ಯ ಎಂದರೆ ಇಂಡಿಯಾ” ಎನ್ನುವ ಮಾತೊಂದಿದೆ. ಇಂಡಿಯಾದ ಅನೇಕ ವೈಶಿಷ್ಯಗಳು, ವೈವಿಧ್ಯಗಳು ಮಂಡ್ಯದಲ್ಲಿವೆ. ಹೇಳಿ ಕೇಳಿ ಇದು ಬಯಲು ಸೀಮೆ. ೧೯೩೯ಕ್ಕೆ ಮುಂಚೆ ಮಂಡ್ಯ ಮೈಸೂರು ಜಿಲ್ಲೆಗೆ ಸೇರಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೃಪೆಯಿಂದ ಮಂಡ್ಯ ಪ್ರತ್ಯೇಕ ಅಸ್ತಿತ್ವಕ್ಕೆ ಬಂತು. ಅದಕ್ಕಾಗಿ ನಾಲ್ವಡಿಯವರಿಗೆ ನಮಿಸೋಣ.

ನಾಲ್ವಡಿಯವರು ಮಂಡ್ಯವನ್ನು ಪ್ರತ್ಯೇಕ ಜಿಲ್ಲೆ ಮಾಡುವುದಕ್ಕೆ ಮುಂಚೆಯೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕನ್ನಂಬಾಡಿ ಎಂಬಲ್ಲಿ ಕೃಷ್ಣರಾಜ ಜಲಾಶಯ ನಿರ್ಮಿಸಿದರು. ಮಂಡ್ಯಕ್ಕೆ ನೀರುಣಿಸಿದರು. ಮೈಸೂರು ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಕಾರಣರಾದರು. ಸರ್.ಎಂ. ವಿಶ್ವೇಶ್ವರಯ್ಯನವರು ಎಂಜಿನಿಯರ್ ಆಗಿ, ದಿವಾನರಾಗಿ ಮೈಸೂರಿನ ನವಶಿಲ್ಪಿಯಾಗಿ ಕಂಗೊಳಿಸಿದರು. ಮಿರ್ಜಾಇಸ್ಮಾಯಿಲ್ ಅವರು ಜಿಲ್ಲೆಯನ್ನು ಸುಂದರಗೊಳಿಸಲು ನೆರವಾದರು. ಡಾ.ವೆಸ್ಲಿ ಸಿ.ಕೋರ್ಲ್ಮ ಜಿಲ್ಲೆಯ ಕಬ್ಬು ಬೆಳೆ-ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆ ಕಾರಣರಾದರು.

ಮಂಡ್ಯಜಿಲ್ಲೆ ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿದೆ. ಉತ್ತರದಲ್ಲಿ ತುಮಕೂರು ದಕ್ಷಿಣ ಹಾಗೂ ನೈರುತ್ವದಲ್ಲಿ ಮೈಸೂರು, ಪೂರ್ವಕ್ಕೆ ರಾಮನಗರ, ವಾಯುವ್ಯಕ್ಕೆ ಹಾಸನ ಜಿಲ್ಲೆಗಳ ಗಡಿಗಳಿಂದ ಸುತ್ತುವರೆದಿದೆ. ಈ ಜಿಲ್ಲೆಯ ಒಟ್ಟು ವಿಸ್ತೀರ್ಣ ೪೯೫೮ ಚದರ ಕಿ.ಮೀ.ಗಳು ಅಂದರೆ ೧೯೨೪ ಚದರ ಮೈಲಿ. ಸಮುದ್ರಮಟ್ಟಕ್ಕಿಂತ ಸುಮಾರು ೭೬೨ರಿಂದ ೯೧೪ಮೀಟರ್ ಎತ್ತರಕ್ಕಿದೆ. ಮಂಡ್ಯಜಿಲ್ಲೆಯಲ್ಲಿ ಏಳು ತಾಲ್ಲೂಕುಗಳಿವೆ. ಅವು ಮಂಡ್ಯ, ಮದ್ದೂರು, ಮಳವಳ್ಳಿ, ಕೃಷ್ಣರಾಜಪೇಟೆ, ನಾಗಮಂಗಲ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳು ಸುಮಾರು ಒಂದೂವರೆ ಸಾವಿರ ಹಳ್ಳಿಗಳಿದ್ದು ಪ್ರಮುಖ ಕಸುಬು ಬೇಸಾಯ

ಪೌರಾಣಿಕ ಹಿನ್ನಲೆ :

ಈ ಪ್ರದೇಶ ದಂಡಕಾರಣ್ಯ, ಮೃಗಪಕ್ಷಿಗಳ ಆಶ್ರಯಧಾಮ, ಮಾಂಡವ್ಯ, ಕದಂಬ, ಅಗಸ್ತ್ಯ, ಗೌತಮ, ಭೃಗು, ಕಣ್ವ, ಲಂಬಕರ್ಣರ ತಪೋಭೂಮಿ, ಪವಿತ್ರತೀರ್ಥ ಕ್ಷೇತ್ರಗಳು, ಕಾವೇರಿ, ಹೇಮಾವತಿ, ಲೋಕಪಾವನಿ, ವೀರವೈಷ್ಣವಿ ಹಾಗೂ ಶಿಂಷಾ ಎಂಬ ಐದು ನದಿಗಳು.
ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಮಂಡ್ಯಜಿಲ್ಲೆಗೆ ಸಂಬಂಧಿಸಿದಂತೆ ಒಂದು ಸಾವಿರಕ್ಕೂ ಹೆಚ್ಚು ಶಾಸನಗಳು ಲಭ್ಯವಾಗಿವೆ. ಗಗನಚುಕ್ಕಿ-ಭರಚುಕ್ಕಿ ಜಲಪಾತಗಳು ಇಲ್ಲಿವೆ. ಕೊಕ್ಕರೆಬೆಳ್ಳೂರು, ರಂಗನತಿಟ್ಟು, ಆದಿಚುಂಚನಗಿರಿ ನವಿಲು ಮುಂತಾದ ಪಕ್ಷಿಧಾಮಗಳು ಪ್ರವಾಸಿಗಳನ್ನು ಆಕರ್ಷಿಸುತ್ತಿವೆ. ವೀರಗಲ್ಲು-ಮಾಸ್ತಿಕಲ್ಲುಗಳ ಸಂಖ್ಯೆ ಗಣನೀಯವಾಗಿದೆ.

1 comment:

  1. The Sands Casino, Hotel and Skypod | Temecula, CA
    The sands casino, hotel and skypod is a beautiful destination septcasino for all types worrione of entertainment. The sands 메리트카지노총판 casino is located in Temecula, California and is close to

    ReplyDelete