Sunday, 31 August 2014

ಮೇಲುಕೋಟೆ

ಮೇಲುಕೋಟೆ


ಮೇಲುಕೋಟೆ ಪ್ರಸಿದ್ದ ಯಾತ್ರ ಸ್ಥಳ. ದ್ವಾಪರಯುಗದಲ್ಲಿ ಕೃಷ್ಣ ಮತ್ತು ಯಾದವರು ನಾರಾಯಣನನ್ನು ಪೂಜಿಸಿದ್ದರಿಂದ ಮುಂದೆ ಅಂದರೆ ೯೦೦ ವರ್ಷಗಳ ಹಿಂದೆ ಯತಿಗಳಾದ ರಾಮಾನುಜಚಾರ್ಯರು ಇಲ್ಲಿಗೆ ಆಗಮಿಸಿ ದೇವಾಲಯ, ಕಲ್ಯಾಣಿ, ಕೆರೆ ಕಟ್ಟೆಗಳನ್ನೊಳಗೊಂಡಂತೆ ಸಮಸ್ತ ಮೇಲುಕೋಟೆಯನ್ನು ಜೀರ್ಣೋದ್ಧಾರ ಮಾಡಿದ್ದರಿಂದ ಯದು-ಶೈಲ ಎಂದು ಹೆಸರಾಯಿತು. ಇಲ್ಲಿನ ಆರಾಧ್ಯ ದೈವ ಚೆಲುವನಾರಾಯಣ ಮೇಲುಕೋಟೆ ಗ್ರಾಮದಲ್ಲಿದ್ದರೆ, ಯೋಗಾನರಸಿಂಹಸ್ವಾಮಿ ಬೆಟ್ಟದ ಮೇಲಿದೆ. ಪಂಚಕಲ್ಯಾಣಿ, ಧನುಷ್ಕೋಟಿ, ದಳವಾಯಿಕೆರೆ ಮುಂತಾದ ಪ್ರಾಚೀನ ಕೆರೆ, ಕಟ್ಟೆ, ಕಲ್ಯಾಣಿಗಳನ್ನು ಕಾಣಬಹುದಲ್ಲದೆ ವಿಜಯನಗರ ಕಾಲದ ಗೋಪಾಲರಾಯನ ಹೆಬ್ಬಾಗಿಲು ರಾಜ್ಯ ಸರ್ಕಾರದ ಸಂಸ್ಕೃತ ಪಾಠಶಾಲೆ, ಕೇಂದ್ರರಾಜ್ಯ ಸರ್ಕಾರಗಳ ಸಂಸ್ಕೃತ ಅಕಾಡೆಮಿಗಳಲ್ಲಿ ಪ್ರಾಚೀನ ತಾಳೆಗರಿಗಳ ಸಂಗ್ರಹವನ್ನು ಕಾಣಬಹುದು.

ವೈರಮುಡಿ

ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಕ್ಷೇತ್ರದಲ್ಲಿರುವ ಶ್ರೀ ಚಲುವನಾರಾಯಣಸ್ವಾಮಿಗೆ ಪ್ರತಿವರ್ಷ ಮಾರ್ಚಿ ತಿಂಗಳಲ್ಲಿ ಪಡೆಯುವ ಉತ್ಸವವೇ ವೈರಮುಡಿ ರಾಜರ ಕಾಲದಲ್ಲಿ ನೀಡಲಾಗಿರುವ ವಜ್ರಖಚಿತವಾದ ಕಿರೀಟಧಾರಣೆ ಮಾಡಿ ಪುರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಈ ವೈರಮುಡಿ ಉತ್ಸವವನ್ನು ನೋಡಲು ದೇಶ ವಿದೇಶಗಳಿಂದ ಸಹಸ್ರಾರು ಭಕ್ತರು ಆಗಮಿಸುವರು.


No comments:

Post a Comment