ಬಸರಾಳು
ಮಂಡ್ಯ ತಾಲ್ಲೂಕಿನ ಒಂದು ಹೋಬಳಿ ಮತ್ತು ಅದರ ಕೇಂದ್ರ ಸ್ಥಳ ಮಂಡ್ಯಕ್ಕೆ ಉತ್ತರದಲ್ಲಿ ೨೪ ಕಿ.ಮೀ. ದೂರದಲ್ಲಿರುವ ಈ ಗ್ರಾಮವು ಹೊಯ್ಸಳ ವಾಸ್ತುಶಿಲ್ಪಕ್ಕೆ ಹೆಸರಾದ ಸ್ಥಳ ಹೊಯ್ಸಳರ ಕಾಲದಲ್ಲಿ ಇದು ಬಸುರಿವಾಳ ಎಂಬ ಹೆಸರಿನ ಅಗ್ರಹಾರವಾಗಿತ್ತು. ಇಲ್ಲಿರುವ ಮಲ್ಲಿಕಾರ್ಜುನ ದೇವಾಲಯ ೧೨೩೪ರಲ್ಲಿ ಹೊಯ್ಸಳದೊರೆ ಎರಡನೆಯ ನರಸಿಂಹ ದಂಡನಾಯಕ ಹರಿಹರನಿಂದ ಸ್ಥಾಪಿಸಲ್ಪಟ್ಟಿತು. ಹರಿಹರ ಸೇವುಣರನ್ನು ಸೋಲಿಸಿ ಅದ್ರ ಸ್ಮರಣಾರ್ಥವಾಗಿ ಇದೇ ಗ್ರಾಮಕ್ಕೆ ಸೇರಿದವನಾದ ತನ್ನ ತಂದೆಯ ಹೆಸರಿನಲ್ಲಿ ಈ ದೇವಾಲಯ ಕಟ್ಟಿಸಿದ.

No comments:
Post a Comment