Sunday, 31 August 2014

ಕೆರೆತೊಣ್ಣೊರು

ಕೆರೆತೊಣ್ಣೊರು


ಮೇಲುಕೋಟೆ ಬೆಟ್ಟಕ್ಕೆ ಹೊಂದಿಕೊಂಡಂತಿರುವ ಕೆರೆತೊಣ್ಣೊರು ಹೊಯ್ಸಳರ ಕಾಲದಲ್ಲಿ ಬೇಸಿಗೆಯ ತಂಗುದಾಣವಾಗಿತ್ತು. ಈಗ ಇದು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಂಡಿದೆ. ಇಲ್ಲಿನ ನಂಬಿನಾರಾಯಣ, ಶ್ರೀವೇಣುಗೋಪಾಲ ದೇವಾಲಯಗಳು ಪ್ರಸಿದ್ದವಾಗಿದೆ. ಸಾವಿರ ಜೈನಯತಿಗಳನ್ನು ವಾದದಲ್ಲಿ ರಾಮಾನುಜರು ಸೋಲಿಸಿದ್ದು ಇದೇ ಜಾಗದಲ್ಲಿ ಎಂದು ಪುರಾವೆಗಳು ಹೇಳುತ್ತವೆ. ರಾಮಾನುಜರೇ ನಿರ್ಮಿಸಿದ ತಿರುಮಲಸಾಗರ ಎರಡು ಬೆಟ್ಟಗಳಿಗೆ ಹೊಂದಿಕೊಂಡಂತೆ ಇದೆ. ಕೆರೆತೊಣ್ಣೊರಿನ ಮದಗ ಎಂಬ ಜಲಪಾತದಲ್ಲಿ ಸ್ನಾನಮಾಡಿದರೆ ಚರ್ಮವ್ಯಾಧಿಗಳು ಪರಿಹಾರವಾಗುತ್ತದೆ ಎಂಬ ಪ್ರತೀತಿ ಇದೆ. ಇಲ್ಲಿಗೆ ಸಮೀಪದ ಸುಂಕಾತೊಣ್ಣೂರಿನಲ್ಲಿ ಕರಿಭಂಟನ ಕಾಳಗಕ್ಕೆ ಸಂಬಂಧಪಟ್ಟಂತೆ ಹಲವಾರು ಐತಿಹ್ಯ ದೊರೆಯುತ್ತವೆ.


No comments:

Post a Comment